Thursday 9 February 2017

ನಮ್ಮ ಹೆಮ್ಮೆಯ ಪ್ರಧಾನಿ

ಎರಡೆರಡು ಸರ್ಜಿಕಲ್ ಸ್ಟ್ರೈಕ್ ಗಳನ್ನು ಯಶಸ್ವಿಯಾಗಿ ನಡೆಸಿ ಅಪಾರ ಜನಪ್ರಿಯತೆಯನ್ನು ಪಡೆದ ನರೇಂದ್ರ ಮೋದಿಯವರನ್ನು ಕಂಡಾಗಲೆಲ್ಲ ಕಾಳಿದಾಸನ ಈ ಶ್ಲೋಕ ನೆನಪಾಗುತ್ತದೆ -

तस्य संवृतमन्त्रस्य गूढाकारेङ्गितस्य च ।
फलानुमेयाः प्रारम्भाः संस्काराः प्राक्तना इव ॥

ಇದು ದಿಲೀಪನನ್ನು ಬಣ್ಣಿಸುವ ಶ್ಲೋಕ.

ಅರ್ಥ - ತನ್ನ ರಹಸ್ಯಸಮಾಲೋಚನೆಗಳನ್ನಾಗಲಿ ಇಂಗಿತಗಳನ್ನಾಗಲಿ ಎಲ್ಲೂ ಬಿಚ್ಚಿಡದ ಆತನ ಉಪಕ್ರಮಗಳು ಫಲಪ್ರಾಪ್ತಿಯಿಂದಲೇ ಊಹಿಸಲ್ಪಡುವಂಥಾಗಿದ್ದವು.

ಇದು ಉತ್ತಮ ಅಧಿಕಾರಿಯ ಲಕ್ಷಣ. ಯಾವುದೇ ಮಹಾಕಾರ್ಯವನ್ನು ಸಾಕಾರಗೊಳಿಸುವುದಕ್ಕೆ ಅನೇಕ ಚಿಂತನೆಗಳು ಸಮಾಲೋಚನೆಗಳು ಕ್ರಿಯಾನ್ವಯನಗಳು ಬೇಕಾಗುತ್ತವೆ. ಇವು ಸ್ವಲ್ಪ ಪ್ರಕಟಗೊಂಡರೂ ವಿಘ್ನಸಂಭವ ನಿಶ್ಚಿತ. ಅಪೇಕ್ಷಿತ ಫಲವೂ ಅಸಾಧ್ಯ. ಆದ್ದರಿಂದಲೇ "ಷಟ್ಕರ್ಣೋ ಭಿದ್ಯತೇ ಮಂತ್ರಃ" ಎಂಬ ನೀತಿ ಪ್ರಸಿದ್ಧವಾಗಿರುವುದು.

ಈ ಹಿನ್ನೆಲೆಯಲ್ಲಿ ಕಂಡಾಗ ಮೋದಿಯವರ ಮುತ್ಸದ್ಧಿತನವೂ, "ಮೊದಲೇ ಹೇಳಬೇಕಿತ್ತು, ಕಾಲಾವಕಾಶ ಕೊಡಬೇಕಿತ್ತು " - ಎಂದೆಲ್ಲಾ ಹೇಳುವವರ ಬಾಲಿಶತನವೂ ಏಕಕಾಲದಲ್ಲಿ ಸುವೇದ್ಯವಾಗುತ್ತದೆ.

ಅವರನ್ನು ಕಾಣುತ್ತಿರುವಾಗಲೆಲ್ಲ, ನನ್ನ ದೇಶವನ್ನು ಮುನ್ನಡೆಸಲು ಆ ತಲೆಯಲ್ಲಿ ಇನ್ನಾವ ಯೋಜನೆಗಳು ರೂಪುಗೊಂಡಿವೆಯೋ ಎಂಬ ಸಾನಂದ ಕೌತೂಹಲವೂ ಮೂಡುತ್ತಿರುತ್ತದೆ :-)

No comments:

Post a Comment